ಈ ಭಾವಗೀತೆ...

 - ಚಿ. ಉದಯಶಂಕರ್
ಈ ಭಾವಗೀತೆ ನಿನಗಾಗಿ ಹಾಡಿದೆ ||
ಅನುರಾಗ ನನ್ನನು ಕವಿಯಾಗಿ ಮಾಡಿದೆ

ಬಳ್ಳಿಯಲಿ ಹೂವು ತುಂಬಿ ಮರಗಳಲಿ ಜೀವ ತುಂಬಿ
ಎಲ್ಲೆಲಿ ನೋಡಿದರಲ್ಲಿ ಹೊಸ ಹಸಿರು ತುಂಬಿದೆ
ಹಾಡುತಿರೆ ದುಂಬಿಗಳೆಲ್ಲ ಹಾರುತಿರೆ ಹಕ್ಕಿಗಳೆಲ್ಲ
ತೋಳಿಂದ ನನ್ನನು ಬಳಸಿ ನೀ ಸನಿಹ ನಿಂತಿರೆ
ನಿನ್ನ ಅಂದ ಕಂಡು ಸಂತೋಷಗೊಂಡು ಹೊಸ ಭಾವ ಮೂಡಲು

ಕಣ್ಣಿನಲಿ ರೂಪ ತುಂಬಿ ಮನಸಿನಲಿ ಪ್ರೇಮ ತುಂಬಿ
ನನ್ನೆದೆಯ ವೀಣೆಯ ಮೀಟಿ ಹೊಸ ನಾದ ತುಂಬಿದೆ
ಆಸೆಗಳ ತಂದು ತುಂಬಿ ಮೋಹವನು ತುಂಬಿ ತುಂಬಿ
ನೂರಾರು ಕನಸುಗಳನ್ನು ಬಾಳಲ್ಲಿ ತುಂಬಿದೆ
ಹೀಗೇಕೆ ಹೀಗೆ ನೀ ಮೌನವಾದೆ ಕರಣ ಹೇಳದೆ

Video link:
http://www.youtube.com/watch?v=mhEeGkwa6-Q
English lyrics:
http://www.madhurabhavageethegalu.blogspot.com/2012/06/ee-bhavageethe.html

No comments:

Post a Comment

Note: Only a member of this blog may post a comment.